ಅದ್ದೂರಿಯಾಗಿ ಹಸೆಮಣೆ ಏರಿದ ‘ಗೀತಾ ಗೋವಿಂದಂ’ ಜೋಡಿ: ಉದಯಪುರದಲ್ಲಿ ರಶ್ಮಿಕಾ-ವಿಜಯ್ ಕಲ್ಯಾಣ!
ಮುಖ್ಯಾಂಶಗಳು:
-
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ರಾಜಸ್ಥಾನದ ಉದಯಪುರದಲ್ಲಿಂದು ಅಧಿಕೃತವಾಗಿ ಹಸೆಮಣೆ ಏರಿದ್ದಾರೆ.
-
ಇಂದು ಮುಂಜಾನೆ ತೆಲುಗು ಸಂಪ್ರದಾಯದಂತೆ ಮದುವೆ ನೆರವೇರಿದ್ದು, ಸಂಜೆ ಕೊಡವ ಶೈಲಿಯಲ್ಲಿಯೂ ವಿವಾಹ ನಡೆಯಲಿದೆ.
-
ಮಾರ್ಚ್ 04 ರಂದು ಹೈದರಾಬಾದ್ನಲ್ಲಿ ಸಿನಿ ಗಣ್ಯರು ಹಾಗೂ ರಾಜಕೀಯ ನಾಯಕರಿಗಾಗಿ ಅದ್ದೂರಿ ಆರತಕ್ಷತೆ ಆಯೋಜಿಸಲಾಗಿದೆ.

ಕಡೆಗೂ ಅಭಿಮಾನಿಗಳ ಕಾಯುವಿಕೆಗೆ ಹಾಗೂ ರೂಮರ್ಗಳಿಗೆ ಅಧಿಕೃತ ಬ್ರೇಕ್ ಬಿದ್ದಿದೆ! ಸ್ಯಾಂಡಲ್ವುಡ್ನ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಟಾಲಿವುಡ್ನ ರೌಡಿ ಬಾಯ್ ವಿಜಯ್ ದೇವರಕೊಂಡ (Vijay Deverakonda) ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್ನಲ್ಲಿ ಇಂದು (ಫೆಬ್ರವರಿ 26) ಈ ಕ್ಯೂಟ್ ಜೋಡಿಯ ವಿವಾಹ ಮಹೋತ್ಸವ ಅತ್ಯಂತ ಅದ್ದೂರಿಯಾಗಿ ಜರುಗಿದೆ.
ಕುಟುಂಬಸ್ಥರು, ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಇಂದು ಮುಂಜಾನೆಯ ಶುಭ ಲಗ್ನದಲ್ಲಿ ತೆಲುಗು ಸಂಪ್ರದಾಯದಂತೆ ವಿಜಯ್ ಅವರು ರಶ್ಮಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಎರಡು ದಿನಗಳ ಹಿಂದೆಯೇ ತೆಲಂಗಾಣದಿಂದ ಆಗಮಿಸಿದ್ದ ಪುರೋಹಿತರ ತಂಡ ಈ ಮದುವೆ ಶಾಸ್ತ್ರಗಳನ್ನು ವಿಜೃಂಭಣೆಯಿಂದ ನೆರವೇರಿಸಿದೆ. ನಿನ್ನೆಯಷ್ಟೇ ಅದ್ದೂರಿ ಅರಿಶಿನ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮಗಳು ಕಳೆಗಟ್ಟಿದ್ದವು.
ಕಳೆದ ಹಲವು ವರ್ಷಗಳಿಂದ ಗುಟ್ಟಾಗಿ ಪ್ರೇಮ ಪಕ್ಷಿಗಳಾಗಿ ಹಾರಾಡುತ್ತಿದ್ದ ಈ ಜೋಡಿಯ ಪ್ರೀತಿಗೆ ಈಗ ಮದುವೆಯ ಅಧಿಕೃತ ಮುದ್ರೆ ಬಿದ್ದಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಈಗ ಎರಡು ಸಂಪ್ರದಾಯಗಳಿಗೆ ಗೌರವ ನೀಡಲು ಮುಂದಾಗಿದೆ. ಇಂದು ಸಂಜೆ ಕೊಡವ ಶೈಲಿಯಲ್ಲಿಯೂ ಇವರ ಮದುವೆ ಮತ್ತೊಮ್ಮೆ ನಡೆಯಲಿದೆ. ಆದರೆ, ಈ ನವಜೋಡಿಯ ಅಧಿಕೃತ ಮದುವೆ ಫೋಟೋಗಳಿಗಾಗಿ ಫ್ಯಾನ್ಸ್ ಇನ್ನೂ ಕಾದು ಕೂರಬೇಕಾಗಿದೆ.
ಮದುವೆಯನ್ನು ಕೇವಲ ಅತ್ಯಾಪ್ತರಿಗಷ್ಟೇ ಸೀಮಿತಗೊಳಿಸಿರುವ ಈ ತಾರಾ ಜೋಡಿ, ಮಾರ್ಚ್ 04 ರಂದು ಹೈದರಾಬಾದ್ನ ತಾಜ್ ಕೃಷ್ಣ ಹೋಟೆಲ್ನಲ್ಲಿ ಭವ್ಯವಾದ ಆರತಕ್ಷತೆ ಹಮ್ಮಿಕೊಂಡಿದೆ. ಈ ಗ್ರ್ಯಾಂಡ್ ರಿಸೆಪ್ಷನ್ಗೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದ ಗಣ್ಯರು, ಆಂಧ್ರ-ತೆಲಂಗಾಣದ ರಾಜಕೀಯ ನಾಯಕರು ಹಾಗೂ ಕೇಂದ್ರ ಸಚಿವರು ಸಾಕ್ಷಿಯಾಗಲಿದ್ದಾರೆ.
